ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಚೈತ್ರಾರ ಜಗಳದಿಂದ ಸುದೀಪ್‌ಗೆ ಅವಮಾನ!

"ಇಬ್ಬರ ಹೆಸರು ಚೈತ್ರಾ ಅಂತಲೇ ಇದೆ. ಪ್ರತಿಯೊಬ್ಬರು ಅವರವರ ಐಡೆಂಟಟಿ ಆಧಾರದ ಮೇಲೆ ಬಿಗ್‌ ಬಾಸ್ ಮನೆಯಲ್ಲಿರುತ್ತಾರೆ. ಚೈತ್ರಾ ಅಂತ ಬೇರೆಯವರು ಕರೆದರೆ ನಾನು ತಿರುಗಿ ನೋಡ್ತೀನಿ. ನನ್ನನ್ನು ಬೇರೆಯವರು ಕರೆದರೆ ಅವರು ತಿರುಗಿ ನೋಡ್ತಾರೆ. ವೈಯಕ್ತಿಕ ಕಾರಣ ಏನೂ ಇಲ್ಲ. ಇಬ್ಬರೂ ಚೈತ್ರಾ ಬೇಡ" ಅಂತ ಚೈತ್ರಾ ಕೊಟ್ಟೂರು ಅವರು ಚೈತ್ರಾ ವಾಸುದೇವನ್ ಹೆಸರನ್ನು ನೀಡಿ ನಾಮಿನೇಟ್ ಮಾಡಿದ್ದರು. ಈಗ ಅದೇ ಹೆಸರು ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿದೆ. ಚೈತ್ರಾ ವಾಸುದೇವನ್‌ಗೆ ಈಗಾಗಲೇ ಮದುವೆಯಾಗಿದೆ. ಚೈತ್ರಾ ಕೊಟ್ಟೂರ್‌ ಅವರು ಶೈನ್ ಶೆಟ್ಟಿ ಹಿಂದೆ ಬಿದ್ದಿದ್ದಾರೆ.
       ಶೈನ್ ಶೆಟ್ಟಿ ಬೇಡ ಅಂದರೂ ಕೂಡ ಹೆಡ್‌ ಮಸಾಜ್‌ ಮಾಡಿಕೊಡುವುದಾಗಿ ಚೈತ್ರಾ ಕೊಟ್ಟೂರು ಒತ್ತಾಯಿಸಿದ್ದರು. ಎಲ್ಲಿ ಶೈನ್ ಇರುತ್ತಾರೋ ಅಲ್ಲಿ ಚೈತ್ರಾ ಇರುತ್ತಾರೆ. ಚೈತ್ರಾ ಇಷ್ಟಪಟ್ಟು ಈ ರೀತಿ ಮಾಡುತ್ತಿದ್ದಾರೋ ಅಥವಾ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಕಾಲ ಉಳಿಯಲು ಈ ರೀತಿ ಮಾಡುತ್ತಿದ್ದಾರೋ ತಿಳಿಯತ್ತಿಲ್ಲ. ಆದರೆ ಚೈತ್ರಾ ಅವರು ಶೈನ್ ಶೆಟ್ಟಿ ಹಿಂದೆ ಬಿದ್ದಿದ್ದಾರೆ. ಚೈತ್ರಾ ಕೊಟ್ಟೂರು ನಡೆವಳಿಕೆಯಿಂದ ತನಗೆ ಸಮಸ್ಯೆ ಉಂಟಾಗುತ್ತಿದೆ ಎನ್ನೋದು ಚೈತ್ರಾ ವಾಸುದೇವನ್ ಅವರ ಆರೋಪ. ಈ ಸಮಸ್ಯೆಗೆ ಇಂದು ಕಿಚ್ಚ ಏನು ಪರಿಹಾರ ನೀಡಲಿದ್ದಾರೆ ಎನ್ನೋದು ತಿಳಿಯಲಿದೆ. ಅಷ್ಟೇ ಅಲ್ಲದೆ ಇಬ್ಬರು ಚೈತ್ರಾ ಪರಸ್ಪರ ವಾದ-ವಿವಾದ ಮಾಡಿಕೊಳ್ಳುತ್ತಿರುವುದು ಸುದೀಪ್‌ಗೆ ಅವಮಾನ ಆಗುತ್ತಿದೆ ಎಂದು ಅವರೇ ಹೇಳಿದ್ದಾರೆ.

Comments